
14th June 2025
ಕುಷ್ಟಗಿ : ಮೈತ್ರಿ ಮೆಲೋಡೀಸ್ ಕಲಾ ವೃಂದ ಗಜೇಂದ್ರಗಡ ಹಾಗೂ ಬಿಜಕಲ್ಲ ಗ್ರಾಮದ ಕಲಾಭಿಮಾನಿಗಳ ಸಹಕಾರದೊಂದಿಗೆ ಸ್ವರ ಸಂಗಮ ಕಲಾ ವೃಂದ ಬೆಂಗಳೂರು ಇವರ ಸಹಯೋಗದಲ್ಲಿ ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಕರೋಕೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನಾಳೆ ದಿನಾಂಕ: 15-06-2025 ಭಾನುವಾರ ಮುಂಜಾನೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಬಿಜಕಲ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ
ಈ ಕಾರ್ಯಕ್ರಮವು ನಡೆಯಲಿದ್ದು, ಅಧ್ಯಕ್ಷತೆಯನ್ನು
ಶ್ರೀ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ವಿರಕ್ತಮಠ, ಬಿಜಕಲ್ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಜುನಾಥ ಎಂ. ಕೂಡ್ಲಿಗಿ ಅಧ್ಯಕ್ಷರು, ಸ್ವರ ಸಂಗಮ ಕಲಾ ವೃಂದ, ಬೆಂಗಳೂರು,
ರೆಹಮಾನ್ ಹೆಚ್. ಕೋಳೂರು ಪ್ರಧಾನ ಕಾರ್ಯದರ್ಶಿ, ಸ್ವರ ಸಂಗಮ ಕಲಾ ವೃಂದ, ಬೆಂಗಳೂರು, ಶರಣಪ್ಪ ಎಂ. ತಳುವಗೆರೆ ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸೇವಾ ಸಮಿತಿ, ಬಿಜಕಲ್, ಶಾಂತರಾಜ್ ಗೋಗಿ ಸಂಸ್ಥಾಪಕರು ಶಿಲೆಗಳು ಸಂಗೀತವ ಹಾಡಿವೆ ಗೆಳೆಯರ ಬಳಗ ಕುಷ್ಟಗಿ, ಲಕ್ಷ್ಮಿ ನಾರಾಯಣ ರಾವ್ ಎಸ್.ಪಿ.
ಸಮಾಜ ಸೇವಕರು ಮತ್ತು ಗಾಯಕರು, ಬೆಂಗಳೂರು,
ರಾಜು ಮೆರ್ವಾಡೇ ಅಧ್ಯಕ್ಷರು, ರಾಜ್ ಮೆಲೋಡಿಸ್ ಮತ್ತು ಕರೋಕೆ ಸ್ಟುಡಿಯೋ, ಯಲಬುರ್ಗಾ,
ನಿಂಗರಾಜ್ ವರ್ಮಗಾಳಿ, ಬಿಜಿ ನ್ಯೂಸ್ ಚಾನೆಲ್ ಸಂಪಾದಕರು ಹಾಗೂ ರಾಗ ಕರೋಕೆ ಸ್ಟುಡಿಯೋ ಅಧ್ಯಕ್ಷರು, ಗಜೇಂದ್ರಗಡ, ಸಂಗಪ್ಪ ಜಿ. ತಗ್ಗಿನಮನಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬಿಜಕಲ್,
ಸಣ್ಣ ಹನುಮಂತಪ್ಪ ಬೋವಿ ಗ್ರಾಮ ಪಂಚಾಯಿತಿ ಸದಸ್ಯರು, ಬಿಜಕಲ್, ಮಲ್ಲಿಕಾರ್ಜುನ್ ಶಿ. ಉಪನಾಳ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್,
ಶ್ರೀಮತಿ ಮಲ್ಲಿಕಾ ಬಿ. ಜಗಲಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಹುಲಿಗೆಮ್ಮ ಕೆ. ಪಿಡ್ಡಪ್ಪನವರ್ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಲಕ್ಷ್ಮವ್ವ ಡಿ, ಛಲವಾದಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಶ್ರೀಮತಿ ಮಲ್ಲಮ್ಮ ಎಂ. ಮೇಟಿ ಗ್ರಾಮ ಪಂಚಾಯತಿ ಸದಸ್ಯರು, ಬಿಜಕಲ್, ಸುನಿಲ್ ಕುಮಾರ್ ಗಾಯಕರು, ಕುಷ್ಟಗಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಶೀರ್ ಅಹ್ಮದ್ ಎಂ.ಶಿವಮೊಗ್ಗ ಗಾಯಕರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾಗಿರುವ ಬಾಷ ಬಳಿಗಾರ, ರಾಜು ಗಜೇಂದ್ರಗಡ, ನರಸಿಂಹದಾಸ ತೋಟದ ಇವರು ತಿಳಿಸಿದ್ದಾರೆ.
ಸ್ವರ ಸಂಗಮ ಕಲಾ ವೃಂದ(ರಿ.) ಬೆಂಗಳೂರು ಇದರ ಸಹಕಾರದೊಂದಿಗೆ ನಾಳೆ ಬಿಜಕಲ್ ಗ್ರಾಮದಲ್ಲಿ ಈ ಕರೋಕೆ ಕಾರ್ಯಕ್ರಮ ನಡೆಯಲಿದ್ದು ಕಲಾಭಿಮಾನಿಗಳು ಸಂಗೀತದ ಆಸಕ್ತಿ ಉಳ್ಳವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷರಾದ ಮಂಜುನಾಥ ಎಂ., ಉಪಾಧ್ಯಕ್ಷರಾದ ಧನರಾಜ್, ಪ್ರಧಾನ ಕಾರ್ಯದರ್ಶಿ ರೆಹಮಾನ್ ಸಾಬ್, ಸಹ ಕಾರ್ಯದರ್ಶಿ ಸಿದ್ದಣ್ಣ ಪೂಜೇರಿ, ಖಜಾಂಚಿ ವಸೀಂ ಅಕ್ರಂ, ಹಾಗೂ ಸದಸ್ಯರಾದ ವೀರಭದ್ರಯ್ಯ ಗಬ್ಬೂರು, ಬಿ.ಪಿ. ಬಿಂದು, ಎಂ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ವರದಿ. ಭೀಮಸೇನರಾವ್ ಕುಲಕರ್ಣಿ ಜಿ ಎಂ ನ್ಯೂಜ್ ಕುಷ್ಟಗಿ.
ಮೈತ್ರಿ ಮೆಲೋಡೀಸ್ ಕಲಾ ವೃಂದ ಗಜೇಂದ್ರಗಡ ಹಾಗೂ ಬಿಜಕಲ್ಲ ಗ್ರಾಮದ ಕಲಾಭಿಮಾನಿಗಳ ಸಹಕಾರದೊಂದಿಗೆ ಸ್ವರ ಸಂಗಮ ಕಲಾ ವೃಂದ ಬೆಂಗಳೂರು ಇವರ ಸಹಯೋಗದಲ್ಲಿ ಕುಷ್ಟಗಿ ತಾಲೂಕಿನ ಬಿಜಕಲ್ಲ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಕರೋಕೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಾಳೆ ದಿನಾಂಕ: 15-06-2025 ಭಾನುವಾರ ಮುಂಜಾನೆ 09.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಬಿಜಕಲ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.